ಮಿಂಚಿನ ಮಾಟ


ಕೂಗು ಕೂಗೆಲೆ ಕೊಗಿಲೆಯೆ ನೀ
ಗಳಪುತಿರು ಇರು ಅರಗಿಣಿ!
ಏಗಲೂ ನುಡಿ ಕೊಳಲೆ, ವೀಣೆಯೆ-
ರಾಗಿಸಲಿ ನಿನ್ನಾ ಧ್ವನಿ!
ನಿಮ್ಮ ಉಲುಹಿನೊಳೆಲ್ಲಾ….
ನಿಮ್ಮ ಉಲುಹಿನೊಳೆಲ್ಲ-ಕೇಳುವೆ
ನಮ್ಮವನ ಸವಿಸೊಲ್ಲಾ.


ತುಂಬುದಿಂಗಳ ಬಿಂಬವೇ ನೀ
ಕಾಂಬೆಯೇಕೊಂದೇ ದಿನ?
ಅಂಬರದಿ ನಗುತಿದ್ದರಾಗದೆ-
ಇಂಬು ಬಿಡದೆಯೆ ದಿನದಿನ?
ನಗುಮೊಗದ ನಿನ್ನಲ್ಲಿ….
ನಗುಮೊಗದ ನಿನ್ನಲ್ಲಿ ರಮಣನ
ನಗೆಯ ಬಗೆಯಿಹುದಲ್ಲಿ!


ತನಿರಸವನೆಲ್ಲಿಂದ ತಂದಿರೆ
ಹಣ್ಣು-ಹಂಪಲವೇ?
ಇನಿದನೆಲ್ಲಿಂದೆಳೆದಿಹಿರಿ ಕೆನೆ-
ವಾಲೆ ಜೇಂಗೊಡವೇ?
ಬಲ್ಲೆನಾನಿದರಂದ….
ಬಲ್ಲೆನಾ ತಂದಿರುವಿರಿನಿಯನ
ಬಾಯ ತಂಬುಲದಿಂದ.


ಮುಡಿದ ಮಾಲೆಯ ಮೆಲ್ಲಿತಾಗಿಹ
ಬೆಡಗಿನಲರಿನ ಸೋಂಕದು
ಒಡೆಯನಪ್ಪುಗೆ-ಸೊಗವ ಮನದೆದು-
ರಿಡುವ ಸಾಧನವಹುದಿದು;
ಆದರೇನಿದು ಎಲ್ಲಾ….
ಆದರೇನಿದು ಎಲ್ಲವೂ ಬಲು-
ಬೇಗ ಬಯಲಹುದಲ್ಲಾ!


ಎಲ್ಲವು ತೋರುವುವು ನನ್ನೆದು-
ರಲ್ಲಿ ಮಿಂಚಿನ ಮಾಟವ
ನಲ್ಲನೊಡನಿರೆ ಸವಿನೆನವಿರತ-
ಎಲ್ಲವೀ ಸೊಗದೂಟವ
ಬರುವುದೆಂದಾ ಕಾಲ….
ಬರುವುದೆಂದೋ ಎಂದು ನೂಕುತ
ಲಿರುವೆ ದಿನಗಳನೆಲ್ಲ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದಾ ನಿನ್ನ ಧ್ಯಾನಿಪೆ
Next post ಅತಿಥಿ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys